ಬ್ರಹಸ್ಪತಿಯ ೬ನೇ ಗೋಚಾರ, ಹೇಗೆ? ಮತ್ತು ಏನಾಯ್ತು?
1 (ಗುರು) ಚಂದ್ರ ಲಗ್ನ ೦೭/೧೦/೧೯೫೨, ರಾ.೧೧.೪೫ ಉಡುಪಿ ಜಿಲ್ಲಾ ಕೇತು ರಾಹು ಕುಜ ಶುಕ್ರ ಬುಧ ರವಿ ಶನಿ ನೋಡಿ, ಬ್ರಹಸ್ಪತಿಯ ಮೊದಲನೇ ಸುತ್ತಿನಲ್ಲಿ , ಅಂದರೆ ೦-೧೨ ವರ್ಷದಲ್ಲಿ, ಪ್ರತೀ ರಾಶಿಯನ್ನು ಗೋಚಾರದಲ್ಲಿ ಸುತ್ತು ಹಾಕುತ್ತಾನೆ. ಈ ಜಾತಕರು ಹುಟ್ಟುವಾಗ ಗುರು ಗ್ರಹವು ವಕ್ರಿಯಾಗಿ ಮೇಷದಲ್ಲಿ ಇದ್ದಾನೆ. ಮೊದಲ್ನೇ ೧ ವರ್ಷದಲ್ಲಿ ಆತನು ಮೇಷದಲ್ಲಿರುವನು. ಆಗ ವಕ್ರಿ ಬ್ರಹಸ್ಪತಿಯನ್ನೇ ಮುಟ್ಟಿರುವನು. ಅದೇ ೨ ನೇ ವರ್ಷದಲ್ಲಿ ಆತನು ವೃಷಭದಲ್ಲಿರುವ ಚಂದ್ರನನ್ನ ಮುಟ್ಟಿರುತ್ತಾನೆ. ಹೀಗೆ ೪ನೇ ವರ್ಷದಲ್ಲಿ ಕರ್ಕದಲ್ಲಿರುವ ಕೇತುವನ್ನ ಮುಟ್ಟಿರುತ್ತನೆ. ೬ನೇ ವರ್ಷದಲ್ಲಿ ಅದೆ ಗೋಚರದ ಗುರುವು ರವಿ, ಬುಧ ಹಾಗೂ ಶನಿ ಗ್ರಹಗಳನ್ನ ಮುಟ್ಟಿರುತ್ತಾನೆ. ೭ ನೇ ವರ್ಷದಲ್ಲಿ ಲಗ್ನದಿಂದ ಪಂಚಮ ಸ್ಥಾನವಾದ ತುಲಾದಲ್ಲಿರುವ ಇನ್ನೊಬ್ಬ ಗುರುವಾದ ಶುಕ್ರನನ್ನ ಮುಟ್ಟಿರುತ್ತಾನೆ. ೮ನೇ ವರ್ಷದಲ್ಲಿ ವೃಸ್ಚಿಕದಲ್ಲಿರುವ ಕುಜನನ್ನ ಮುಟ್ಟಿರುತ್ತಾನೆ. ೧೦ನೇ ವರ್ಷದಲ್ಲಿ ಅದೇ ಗೋಚರದ ಬ್ರಹಸ್ಪತಿಯು ಮಕರದಲ್ಲಿರುವ ರಾಹುವನ್ನ ಮುಟ್ಟಿರುತ್ತಾನೆ. ಇನ್ನು ೧೨ನೇ ವರ್ಷದಲ್ಲಿ ಗೋಚಾರದ ಬ್ರಹಸ್ಪತಿಯು ಮೀನ ರಾಶಿಗೆ ಬಂದಿರುತ್ತಾನೆ. ಹೀಗೆ ಆತನ ಮುಂದಿನ ಸೈಕಲ್ಗಳ...